ಶೀಘ್ರದಲ್ಲೇ ‘ಮೇಡಮ್ ಹೇಳಿದ ಕಥೆ ಚಿತ್ರ ತೆರೆಗೆ
Posted date: 12 Mon, Oct 2015 – 02:36:08 PM

ಮಕ್ಕಳ ಸಿನಿಮಾ ನಿರ್ಮಾಣವಾಗುವುದೇ ಅತಿ ವಿರಳ. ವರ್ಷಕ್ಕೆ ಐದಾರು ಚಿತ್ರಗಳು ಬಂದರೆ ಹೆಚ್ಚು. ಮಕ್ಕಳ ಸಿನಿಮಾವನ್ನೇ ಕಮರ್ಷಿಯಲ್ ಸಿನಿಮಾಗೆ ಸರಿಸಮವಾಗಿ ಬಜೆಟ್‌ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ನಿರ್ಮಿಸಿದ್ದಾರೆ ಎನ್.ಉಮಾ. ಮಹಾತಾಯಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಮೇಡಂ ಹೇಳಿದ ಕಥೆ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ.
ಕುಮಾರ್ ಭದ್ರಾವತಿ ಅವರ ‘ಮೇಡಂ ಹೇಳಿದ ಕಥೆ ಕಾದಂಬರಿ ಆಧಾರಿತ ಚಿತ್ರ. ಮಕ್ಕಳಿಗಾಗಿ ರಚಿಸಿದ ಈ ಕಾದಂಬರಿ, ಇದೀಗ ಸಿನಿಮಾ ರೂಪ ಪಡೆದುಕೊಂಡಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕುಮಾರ್ ಭದ್ರಾವತಿ ಅವರೇ ಬರೆದಿದ್ದಾರೆ.
ಭದ್ರಾವತಿ ರಾಮಕೃಷ್ಣ ಮತ್ತು ಡಿ.ದಶರಥ ನಿರ್ದೇಶನವಿರುವ ಈ ಚಿತ್ರಕ್ಕೆ ವಿ.ಎಸ್.ಧ್ರುವರಾಜ್ ಸಂಗೀತ ಸಂಯೋಜಿಸಿದ್ದಾರೆ. ಭದ್ರಾವತಿ ರಾಮಕೃಷ್ಣ ಮತ್ತು ಎಸ್.ಎಲ್.ನಾಗರಾಜ್ ಗೀತ ಸಾಹಿತ್ಯ ಚಿತ್ರಕ್ಕಿದೆ. ಆರ್.ಪ್ರಮೋದ್ ಛಾಯಾಗ್ರಹಣ, ಗುರುರಾಜ ಸಹ ನಿರ್ದೇಶನವಿದೆ.
ಶಾಲೆಯಲ್ಲಿ ಆಯೋಜಿಸಿದ್ದ ಪ್ರವಾಸಕ್ಕಾಗಿ ಮಕ್ಕಳು ತೆರಳುತ್ತಾರೆ. ಈ ಸಂದರ್ಭದಲ್ಲಿ ಮೇಡಮ್ ಮಕ್ಕಳಿಗೆ ಕಥೆಯೊಂದನ್ನು ಹೇಳುತ್ತಾರೆ, ಆ ಕಥೆ ಏನೆಂಬುದೇ ‘ಮೇಡಮ್ ಹೇಳಿದ ಕಥೆ. ನಾಡಿನ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳನ್ನು ಚಿತ್ರದಲ್ಲಿ ಸೆರೆಹಿಡಿಯಲಾಗಿದೆ. ಮಕ್ಕಳಿಗೆ ಅರ್ಥವಾಗುವಂತೆ ಸರಳ ರೀತಿಯಲ್ಲಿ ನಿರೂಪಣೆ ಮಾಡಲಾಗಿದೆ. ಮಕ್ಕಳ ಚಿತ್ರಗಳು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಇಂಥ ಸಿನಿಮಾಗಳಿಗೆ ಪ್ರೋತ್ಸಾಹ ಸಿಗಬೇಕೆಂಬುದು ನಿರ್ಮಾಪಕರ ಆಶಯ.
ತಾರಾಗಣದಲ್ಲಿ ಮನ್‌ದೀಪ್ ರಾಯ್, ಮುಖ್ಯಮಂತ್ರಿ ಚಂದ್ರು, ನೆ.ಲ.ನರೇಂದ್ರ ಬಾಬು, ಜಯಕುಮಾರ್, ಕುಮಾರ್ ಭದ್ರಾವತಿ, ದಶರಥ.ಡಿ ಭದ್ರಾವತಿ, ಎಸ್.ಆಚಿಜನೇಯ, ಡ್ಯಾನ್ಸರ್ ವಿಜಯ್, ಅಮೃತಾ ಕತ್ತಿ, ಭಾಗ್ಯ ಶ್ರೀ, ಬೇಬಿ ಸಂಜನಾ, ಮಾ.ಭರತ್, ಮಾ.ಬಿ.ಎನ್.ಚೇತನ್, ಮಾ.ಸುಮುಖ ಹಾಗೂ ಮಾ.ಭರಣಿ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed